'ಸತ್ಯಾನಂದ' ಚಿತ್ರದ ನಿರ್ದೇಶಕ, ನಿರ್ಮಾಪಕ ಮದನ್ ಪಟೇಲ್ಗೆ ಹೈದರಾಬಾದ್ ವಕೀಲರ ಮೂಲಕ ಸ್ವಾಮಿ ನಿತ್ಯಾನಂದ
ನೋಟೀಸ್ ಜಾರಿ ಮಾಡಿದ್ದಾರೆ. "ಚಿತ್ರದ ನಾಯಕ ನಟನ ಹೋಲಿಕೆ ನನ್ನ ರೀತಿಯೇ ಇದೆ." ಎಂದಿರುವ ಅವರು ಚಿತ್ರೀಕರಣವನ್ನು ಕೂಡಲೆ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಚಿತ್ರೀಕರಣವನ್ನು ನಿಲ್ಲಿಸುವುದಿಲ್ಲ ಎಂದು ಮದನ್ ಪಟೇಲ್ ಸ್ಪಷ್ಟಪಡಿಸಿದ್ದಾರೆ.
ನೋಟೀಸ್ ಜಾರಿ ಮಾಡಿದ್ದಾರೆ. "ಚಿತ್ರದ ನಾಯಕ ನಟನ ಹೋಲಿಕೆ ನನ್ನ ರೀತಿಯೇ ಇದೆ." ಎಂದಿರುವ ಅವರು ಚಿತ್ರೀಕರಣವನ್ನು ಕೂಡಲೆ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಚಿತ್ರೀಕರಣವನ್ನು ನಿಲ್ಲಿಸುವುದಿಲ್ಲ ಎಂದು ಮದನ್ ಪಟೇಲ್ ಸ್ಪಷ್ಟಪಡಿಸಿದ್ದಾರೆ. ಹೈದರಾಬಾದಿನ ವಕೀಲ ಬಿ ಕೃಷ್ಣಕುಮಾರ್ ಮೂಲಕ ಸ್ವಾಮಿ ನಿತ್ಯಾನಂದ ನೋಟೀಸ್ ಜಾರಿ ಮಾಡಿದ್ದು, ನಿತ್ಯಾನಂದ ಹೆಸರು ಬಳಸಿ ಚಿತ್ರ ನಿರ್ಮಿಸದಂತೆ ಸೂಚಿಸಲಾಗಿದೆ. ಸತ್ಯಾನಂದ ಚಿತ್ರ ಮಾರ್ಚ್ 6ರಂದು ಸೆಟ್ಟೇರಿತ್ತು. ಸೆಟ್ಟೇರಿದ ಎರಡೇ ದಿನಗಳಲ್ಲಿ ಮಾರ್ಚ್ 8ರಂದು ನೋಟೀಸ್ ಬಂದಿರುವುದಾಗಿ ಮದನ್ ಪಟೇಲ್ ವಿವರ ನೀಡಿದ್ದಾರೆ.
"ಕುಂಬಳಕಾಯಿ ಕಳ್ಳ ಎಂದರೆ ನೀವ್ಯಾಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತೀರಾ. ನೀವೇನು ತಪ್ಪು ಮಾಡಿಲ್ಲ ಎನ್ನುವುದಾದರೆ ನೀವ್ಯಾಕೆ ಹೆದರುತ್ತೀರಾ. ಒಂದು ವೇಳೆ ಚಿತ್ರದಲ್ಲಿನ ಪಾತ್ರಗಳು ನಿಮ್ಮನ್ನೇ ಹೋಲುವಂತಿದ್ದರೆ ಕೋರ್ಟ್ಗೆ ಹೋಗಿ. ಅಲ್ಲೇ ಇತ್ಯರ್ಥವಾಗಲಿ" ಎಂದು ಮದನ್ ಪಟೇಲ್ ನೋಟೀಸಿಗೆ ಉತ್ತರ ನೀಡಿರುವುದಾಗಿ ಹೇಳಿದ್ದಾರೆ.
ಬೆಳಗಾವಿ
ವಿಶ್ವಕನ್ನಡ ಸಮ್ಮೇಳನ ನಿಮಿತ್ತ ಐದು ದಿನ ಬಿಡುವು ನೀಡಿದ್ದ ಕಾರಣ ಸತ್ಯಾನಂದ ಚಿತ್ರೀಕರಣ ನಿಲ್ಲಿಸಲಾಗಿತ್ತು. ಈಗ ಚಿತ್ರೀಕರಣ ಭರದಿಂದ ಸಾಗಿದೆ. ಸತ್ಯಾನಂದ ಚಿತ್ರೀಕರಣವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಮದನ್ ಪಟೇಲ್ ಸ್ಪಷ್ಟಪಡಿಸಿದ್ದಾರೆ. ಅಂದಹಾಗೆ ರವಿಚೇತನ್ ಎಂಬುವವರು 'ಸತ್ಯಾನಂದ'ನ ಪಾತ್ರವನ್ನು ಪೋಷಿಸುತ್ತಿದ್ದಾರೆ.
ವಿಶ್ವಕನ್ನಡ ಸಮ್ಮೇಳನ ನಿಮಿತ್ತ ಐದು ದಿನ ಬಿಡುವು ನೀಡಿದ್ದ ಕಾರಣ ಸತ್ಯಾನಂದ ಚಿತ್ರೀಕರಣ ನಿಲ್ಲಿಸಲಾಗಿತ್ತು. ಈಗ ಚಿತ್ರೀಕರಣ ಭರದಿಂದ ಸಾಗಿದೆ. ಸತ್ಯಾನಂದ ಚಿತ್ರೀಕರಣವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಮದನ್ ಪಟೇಲ್ ಸ್ಪಷ್ಟಪಡಿಸಿದ್ದಾರೆ. ಅಂದಹಾಗೆ ರವಿಚೇತನ್ ಎಂಬುವವರು 'ಸತ್ಯಾನಂದ'ನ ಪಾತ್ರವನ್ನು ಪೋಷಿಸುತ್ತಿದ್ದಾರೆ.ರಂಜಿತಾ ಪಾತ್ರ ಮಾಡ್ತಾರಂತೆ ದುಂಡು ಮಲ್ಲಿಗೆ ನಮಿತಾ!
ಸ್ವಾಮಿ ನಿತ್ಯಾನಂದ
ಕುರಿತ ವಿವಾದಾತ್ಮಕ ಚಿತ್ರವನ್ನು ಮದನ್ ಪಟೇಲ್ ಕೈಗೆತ್ತಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಚಿತ್ರಕ್ಕೆ ಅವರು 'ಸತ್ಯಾನಂದ' ಎಂದು ಹೆಸರಿಟ್ಟಿದ್ದಾರೆ. ಸ್ವಾಮಿ ನಿತ್ಯಾನಂದ ನೈಜಕತೆ ಎಂದ ಮೇಲೆ ರಂಜಿತಾ ಇರದಿದ್ದರೆ ಹೇಗೆ. ಈ ಪಾತ್ರಕ್ಕಾಗಿ ಸ್ವತಃ ರಂಜಿತಾ ಅವರನ್ನೇ ಮದನ್ ಸಂಪರ್ಕಿಸಲು ಪ್ರಯತ್ನಿಸಿ ವಿಫಲರಾಗಿದ್ದರು.
ಕಡೆಗೆ ರಂಜಿತಾ ಪಾತ್ರವನ್ನು ಪೋಷಿಸಲು ಸೆಕ್ಸಿ ತಾರೆ ನಮಿತಾರನ್ನು ಆಹ್ವಾನಿಸಿದ್ದಾರೆ. ಆದರೆ ನಮಿತಾ ಈ ಪಾತ್ರಕ್ಕೆ ಜೀವ ತುಂಬಲು ಊ ಅಂದಿದ್ದಾರೋ ಊಹುಂ ಅಂದಿದ್ದಾರೋ ತಿಳಿದುಬಂದಿಲ್ಲ. ಒಟ್ಟಿನಲ್ಲಿ ಆಕೆಯನ್ನು ಕರೆತರುವ ಎಲ್ಲ ಸಿದ್ಧತೆಗಳನ್ನು ಮದನ್ ಮಾಡುತ್ತಿದ್ದಾರೆ. ನಮಿತಾ ಸಿಗದಿದ್ದರೆ ಚಾರ್ಮಿ ಕೌರ್ ಅವರನ್ನು ಕರೆತರುವುದಾಗಿ ಮದನ್ ಹೇಳಿದ್ದಾರೆ.ಆದರೆ ಇನ್ನೂ ಯಾರು ಎಂಬುದು ಕನ್ಫರ್ಮ್ ಆಗಿಲ್ಲ.
ಅಂದಹಾಗೆ ನಿತ್ಯಾನಂದನ ಪಾತ್ರವನ್ನು ರವಿ ಚೇತನ್ ಎಂಬುವವರು ಪೋಷಿಸುತ್ತಿದ್ದಾರೆ. ಸದ್ಯಕ್ಕೆ ಈ ಚಿತ್ರದ ಚಿತ್ರೀಕರಣ ಮಹಾರಾಣಿ ಕಾಲೇಜು ಮುಂದಿನ ಫ್ರೀಡಂ ಪಾರ್ಕಿನಲ್ಲಿ ಭರದಿಂದ ಸಾಗಿದೆ. 'ಕೋಟಿಗೊಬ್ಬ' ಚಿತ್ರದ ಮೂಲಕ ರವಿ ಚೇತನ್ ಬೆಳ್ಳಿತೆರೆಗೆ ಅಡಿಯಿಟ್ಟಿದ್ದರು. ಬಳಿಕ ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದರು. ಇದೊಂದು ಚತುರ್ಭಾಷಾ ಚಿತ್ರ ಎನ್ನುತ್ತಾರೆ ಮದನ್.
ಕುರಿತ ವಿವಾದಾತ್ಮಕ ಚಿತ್ರವನ್ನು ಮದನ್ ಪಟೇಲ್ ಕೈಗೆತ್ತಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಚಿತ್ರಕ್ಕೆ ಅವರು 'ಸತ್ಯಾನಂದ' ಎಂದು ಹೆಸರಿಟ್ಟಿದ್ದಾರೆ. ಸ್ವಾಮಿ ನಿತ್ಯಾನಂದ ನೈಜಕತೆ ಎಂದ ಮೇಲೆ ರಂಜಿತಾ ಇರದಿದ್ದರೆ ಹೇಗೆ. ಈ ಪಾತ್ರಕ್ಕಾಗಿ ಸ್ವತಃ ರಂಜಿತಾ ಅವರನ್ನೇ ಮದನ್ ಸಂಪರ್ಕಿಸಲು ಪ್ರಯತ್ನಿಸಿ ವಿಫಲರಾಗಿದ್ದರು.ಕಡೆಗೆ ರಂಜಿತಾ ಪಾತ್ರವನ್ನು ಪೋಷಿಸಲು ಸೆಕ್ಸಿ ತಾರೆ ನಮಿತಾರನ್ನು ಆಹ್ವಾನಿಸಿದ್ದಾರೆ. ಆದರೆ ನಮಿತಾ ಈ ಪಾತ್ರಕ್ಕೆ ಜೀವ ತುಂಬಲು ಊ ಅಂದಿದ್ದಾರೋ ಊಹುಂ ಅಂದಿದ್ದಾರೋ ತಿಳಿದುಬಂದಿಲ್ಲ. ಒಟ್ಟಿನಲ್ಲಿ ಆಕೆಯನ್ನು ಕರೆತರುವ ಎಲ್ಲ ಸಿದ್ಧತೆಗಳನ್ನು ಮದನ್ ಮಾಡುತ್ತಿದ್ದಾರೆ. ನಮಿತಾ ಸಿಗದಿದ್ದರೆ ಚಾರ್ಮಿ ಕೌರ್ ಅವರನ್ನು ಕರೆತರುವುದಾಗಿ ಮದನ್ ಹೇಳಿದ್ದಾರೆ.ಆದರೆ ಇನ್ನೂ ಯಾರು ಎಂಬುದು ಕನ್ಫರ್ಮ್ ಆಗಿಲ್ಲ.
ಅಂದಹಾಗೆ ನಿತ್ಯಾನಂದನ ಪಾತ್ರವನ್ನು ರವಿ ಚೇತನ್ ಎಂಬುವವರು ಪೋಷಿಸುತ್ತಿದ್ದಾರೆ. ಸದ್ಯಕ್ಕೆ ಈ ಚಿತ್ರದ ಚಿತ್ರೀಕರಣ ಮಹಾರಾಣಿ ಕಾಲೇಜು ಮುಂದಿನ ಫ್ರೀಡಂ ಪಾರ್ಕಿನಲ್ಲಿ ಭರದಿಂದ ಸಾಗಿದೆ. 'ಕೋಟಿಗೊಬ್ಬ' ಚಿತ್ರದ ಮೂಲಕ ರವಿ ಚೇತನ್ ಬೆಳ್ಳಿತೆರೆಗೆ ಅಡಿಯಿಟ್ಟಿದ್ದರು. ಬಳಿಕ ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದರು. ಇದೊಂದು ಚತುರ್ಭಾಷಾ ಚಿತ್ರ ಎನ್ನುತ್ತಾರೆ ಮದನ್.


