ಸುದೀಪ್ ಅದ್ದೂರಿ ಚಿತ್ರ ಕೆಂಪೇಗೌಡ ತೆರೆಗೆ ಬರಲು ಸಿದ್ಧ

ಸುದೀಪ್ ಅಭಿನಯದ ಕೆಂಪೇಗೌಡ ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದ್ದು ಶೀಘ್ರದಲ್ಲೆ ಚಿತ್ರ ತೆರೆಗೆ ಅಪ್ಪಳಿಸಲಿದೆ. ಮಾರ್ಚ್10ರಂದು ರಾಜ್ಯದಾದ್ಯಂತ ಕೆಂಪೇಗೌಡ ತೆರೆಕಾಣಲಿದೆ ಎನ್ನುತ್ತವೆ ಮೂಲಗಳು. ಶಂಕರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಆರ್.ಶಂಕರ್ ನಿರ್ಮಿಸುತ್ತಿರುವ ಚಿತ್ರ 'ಕೆಂಪೇಗೌಡ'.
ಸುದೀಪ್ ಅವರು ನಾಯಕನಾಗಿ ನಟಿಸಿ ನಿರ್ದೇಶಿಸಿರುವ ಈ ಚಿತ್ರದ ನಾಯಕಿ ರಾಗಿಣಿ. ಗಿರೀಶ್ ಕಾರ್ನಾಡ್, ಅಶೋಕ್, ಜೈಜಗದೀಶ್, ಅಶೋಕ್ ಖೇಣಿ, ತಾರಾ, ಚಿತ್ರಾಶೆಣೈ, ಸಂಗೀತ, ದತ್ತಣ್ಣ, ಶರಣ್, ಬುಲೆಟ್ ಪ್ರಕಾಶ್ ಮುಂತಾದ ಕಲಾವಿದರು 'ಕೆಂಪೇಗೌಡ' ಚಿತ್ರದ ತಾರಾಬಳಗದಲ್ಲಿದ್ದಾರೆ. ಅರ್ಜುನ್ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳ ಸೀಡಿಗಳಿಗೆ ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಎಸ್.ಕೃಷ್ಣರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ನಾಗೇಂದ್ರ ಅರಸ್ ಅವರ ಸಂಕಲವಿದೆ. ರವಿವರ್ಮ-ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ, ಅರುಣ್ ಸಾಗರ್ ಕಲಾ ನಿರ್ದೇಶನ, ಹರ್ಷ - ಪ್ರದೀಪ್ ಅಂಥೋಣಿ ನೃಟ್ಯ ನಿರ್ದೇಶನ ಹಾಗೂ ನರಸಿಂಹ ಜಾಲಹಳ್ಳಿ ನಿರ್ಮಾಣ ನಿರ್ವಹಣೆ 'ಕೆಂಪೇಗೌಡ' ಚಿತ್ರಕ್ಕಿದೆ.